ಕಾರ್ಮೋಡ ಆಗಸವ ನುಂಗಿದಾಗ,
ಸಿಡಿಲು ಮಿಂಚುಗಳು ಬಾನನು ಸೀಳಿದಾಗ
ಭೋರ್ಗರೆಯಿತು ಜೀವನದಿ;
ನಿಷ್ಕರುಣೆಯ ಮೆರೆಯಿತು ದುರ್ವಿಧಿ
ಊರು ಕೇರಿಗಳು ಕೊಚ್ಚಿಹೋಗಿ
ಗುಡಿ ಗೋಪುರಗಳು ಮುಳುಗಡೆಯಾಗಿ
ಹಾಲ್ನೊರೆಯ ಜೀವಜಲದಿ ಹಾಲಾಹಲ
ಕರುಣೆ ಮರೆತ ಆಗಸದಿ ವಿಷಮ ಕೋಲಾಹಲ
ಮನೆಮಠಗಳ ನೆಲಸಮ ಮಾಡಿ
ಕಾಡು ನಾಡುಗಳ ಗುಡಿಸಿ ಸಾರಿಸಿ,
ಪ್ರಾಣಿ ಪಕ್ಷಿಗಳ ನುಂಗಿಹಾಕಿ
ಮೆರೆಯುತಿರುವೆ ಇಷ್ಟು ಕೋಪವೇಕೆ
ಶಿಲೆಗಳಾದರೇ ದೇವರುಗಳೆಲ್ಲಾ
ಕರಗಿಹೋಯಿತೇ ಪುಣ್ಯವೆಲ್ಲಾ !
ಇದು ಯುಗದ ಅಂತ್ಯಕೆ ಮುನ್ನುಡಿಯೋ
ಅಥವಾ ಕಾಲಚಕ್ರದ ಕನ್ನಡಿಯೋ ?
- ಸಂದೀಪ್
ಅಪ್ಪನ ನೆನಪಿನಲ್ಲಿ...
Posted by
drsandy
/
Comments: (0)
ಒಮ್ಮೆ ಕಣ್ಣು ಮುಚ್ಚಿ
ಗತದ ಹಾಳೆಯ
ಹಿಂತಿರುಗಿ ನೋಡಿದರೆ,
ಒಡಲ ಚೀಲದೊಳಗೆ
ಹುದುಗಿ ತಲೆಮಾತ್ರ ಹೋರಹಾಕಿ
ಕಣ್ಣು ಪಿಳುಕಿಸುವ
ಕಾಂಗರೂ ಮರಿಯಂತೆ ಕಂಡದ್ದು;
ಅಪ್ಪ ಹೊದ್ದು ಕುಳಿತ
ಬೆಚ್ಚನೆ ಕೌದಿಯೊಳಗೆ
ಅವಿತು ಕುಳಿತ ನನ್ನದೇ ಮುಖ,
ಹೇಳಿ, ಹೇಳಿಸಿ, ತಿದ್ದಿ, ತದ್ದಿಸಿ
ಬರೆಸಿದ್ದ ಉತ್ತಲೇಖನ – ಅಲ್ಲ
ಉಕ್ತ ಲೇಖನದ
ರಾಶಿ ರಾಶಿಪದಗಳ ನಕ್ಷೆ;
ಬದುಕಿನ ಹೆಜ್ಜೆ ಹೆಜ್ಜೆಗೂ
ನನ್ನ ಜತೆಯಲ್ಲೇ ಇದ್ದು
ನಾನಾಡಿದ, ಬರೆದ, ಅನುಭವಿಸಿದ
ಎಲ್ಲಾ ಪದಗಳೂ
ಮರುಕಳಿಸಿದ ಉಕ್ತಲೇಖನ ರೂಪದಿ
ಅಪ್ಪ ನೀಡಿದ ಭಿಕ್ಷೆ.
ಮನೆ ಮುಂದಿನ ಉದ್ದನೆ
ಹಟ್ಟಿಯಲ್ಲಿ ಚಾಪೆ ಹಾಸಿ ಕೂತು
ಅಪ್ಪನ ಜೊತೆ ಚುಕ್ಕಿಗಳನೆಣಸಿ
ಚಂದಿರನ ಮನೆ ಕದ ತಟ್ಟಿದ್ದು;
ಭಾರತ ರಾಮಾಯಣದ ಪ್ರಸಂಗಗಳನು
ನನ್ನ ಅರಳು ಕಂಗಳ ಮುಂದೆ
ಅಪ್ಪ ಜೀವ ತುಂಬಿದ ದೃಶಕಾವ್ಯವಾಗಿಸಿದ್ದು
ಮನಸಿನ ಮೂಲೆಯಲಿ ಕಲ್ಪನೆಗಳ
ಬೀಜ ನೆಟ್ಟಿದ್ದು, ಉತ್ತೇಜನದ ನೀರೆರೆದಿದ್ದು,
ಓದು ಓದೆಂಬ ಓದಿನ ಹುಚ್ಚಿಗೆ
ನನ್ನ ಹಚ್ಚಿದ್ದು
ಎಲ್ಲ,
ಎಲ್ಲಾ ನೆನ್ನೆ ಮೊನ್ನೆಯ ಹಾಗೆ!
ಮನೆಮಾಡಿನ ಹೊರಗೆ
ಗುಬ್ಬಚ್ಚಿ ಕಟ್ಟಿದ ಗೂಡು
ಬೆಳಕಾಗುತ್ತಲೆ ಶುರುವಾದ
ಹಕ್ಕಿಗಳ ಚಿಲಿಪಿಲಿ ಹಾಡು;
ಊರಾಚೆಯ ಬೆಟ್ಟಕಲ್ಲು ಗುಡ್ಡ ಕಾಡು
ಗಿಡ ಮರ ಕೆರೆ ಕುಂಟೆಗಳಿಗೂ
ನನಗೂ ಬೆಸೆದಿಟ್ಟ
ಆಪ್ತಥಾ ಭಾವದ ಹಾಡು,
ಸುತ್ತಲಿನ ಬದುಕಿನ ಗಡಿಯೊಳಗೇ
ಅವಿತಿರುವ ಮತ್ತೊಂದು
ಅನನ್ಯ ಬದುಕಿನ ಜಾಡು
ತೋರಿದ
ಅಪ್ಪ ಇಂದೆಲ್ಲಿ?
ಕಣ್ಣುಕ್ಕಿ ಬಂದ ಭಾವಕೆ ಕಣ್ಣು ತೆರೆದರೆ
ಎದುರಿಗೆ
ಟೈಸೂಟು ಬೂಟು ಧರಿಸಿದ
ಇಂದಿನ ಸಾಫ್ಟ್ವೇರ್ ಹಾರ್ಡ್ವೇರ್
ಅಪ್ಪಂದಿರು!
ಮಕ್ಕಳ ಮುಂದೆ
ಹಣದ ನೆಲಹಾಸು ಹಾಸಿ
ಟಿ.ವಿ, ಕಂಪ್ಯೂಟರ್ ಬೈಕುಕಾರು
ಬೇಡಿದ್ದೆಲ್ಲವನ್ನು ಬೇಡುವ
ಮುಂಚೆಯೇ ತಂದಿಟ್ಟಾರು.
ಜಗಮಗಿಸುವ ದೀಪಗಳ
ನಗರದ ಕೌತುಕ ಲೋಕವನ್ನೇ
ಅವರ ಮುಂದೆ ತೆರೆದಿಟ್ಟಾರು,
ಹಣದ ಮುಂದೆ ಜಗವೂ ದಾಸತಾನೇ?
ಆದರೆ!
ನನ್ನಪ್ಪ ಬರೀ ನೇಕಾರ
ಹಾಸಲಿಲ್ಲ ಹಣದ ಕಂತೆ
ತೋರಲಿಲ್ಲ ಕೊಳ್ಳುಬಾಕ ಸಂತೆ
ಆದರೂ ಕೊರತೆಯಾಗಲಿಲ
ಮನದರಿವಿನ ವಿಸ್ತಾರಕೆ
- ಎಲ್.ಎನ್.ವಸುಂಧರಾ ದೇವಿ
ಗತದ ಹಾಳೆಯ
ಹಿಂತಿರುಗಿ ನೋಡಿದರೆ,
ಒಡಲ ಚೀಲದೊಳಗೆ
ಹುದುಗಿ ತಲೆಮಾತ್ರ ಹೋರಹಾಕಿ
ಕಣ್ಣು ಪಿಳುಕಿಸುವ
ಕಾಂಗರೂ ಮರಿಯಂತೆ ಕಂಡದ್ದು;
ಅಪ್ಪ ಹೊದ್ದು ಕುಳಿತ
ಬೆಚ್ಚನೆ ಕೌದಿಯೊಳಗೆ
ಅವಿತು ಕುಳಿತ ನನ್ನದೇ ಮುಖ,
ಹೇಳಿ, ಹೇಳಿಸಿ, ತಿದ್ದಿ, ತದ್ದಿಸಿ
ಬರೆಸಿದ್ದ ಉತ್ತಲೇಖನ – ಅಲ್ಲ
ಉಕ್ತ ಲೇಖನದ
ರಾಶಿ ರಾಶಿಪದಗಳ ನಕ್ಷೆ;
ಬದುಕಿನ ಹೆಜ್ಜೆ ಹೆಜ್ಜೆಗೂ
ನನ್ನ ಜತೆಯಲ್ಲೇ ಇದ್ದು
ನಾನಾಡಿದ, ಬರೆದ, ಅನುಭವಿಸಿದ
ಎಲ್ಲಾ ಪದಗಳೂ
ಮರುಕಳಿಸಿದ ಉಕ್ತಲೇಖನ ರೂಪದಿ
ಅಪ್ಪ ನೀಡಿದ ಭಿಕ್ಷೆ.
ಮನೆ ಮುಂದಿನ ಉದ್ದನೆ
ಹಟ್ಟಿಯಲ್ಲಿ ಚಾಪೆ ಹಾಸಿ ಕೂತು
ಅಪ್ಪನ ಜೊತೆ ಚುಕ್ಕಿಗಳನೆಣಸಿ
ಚಂದಿರನ ಮನೆ ಕದ ತಟ್ಟಿದ್ದು;
ಭಾರತ ರಾಮಾಯಣದ ಪ್ರಸಂಗಗಳನು
ನನ್ನ ಅರಳು ಕಂಗಳ ಮುಂದೆ
ಅಪ್ಪ ಜೀವ ತುಂಬಿದ ದೃಶಕಾವ್ಯವಾಗಿಸಿದ್ದು
ಮನಸಿನ ಮೂಲೆಯಲಿ ಕಲ್ಪನೆಗಳ
ಬೀಜ ನೆಟ್ಟಿದ್ದು, ಉತ್ತೇಜನದ ನೀರೆರೆದಿದ್ದು,
ಓದು ಓದೆಂಬ ಓದಿನ ಹುಚ್ಚಿಗೆ
ನನ್ನ ಹಚ್ಚಿದ್ದು
ಎಲ್ಲ,
ಎಲ್ಲಾ ನೆನ್ನೆ ಮೊನ್ನೆಯ ಹಾಗೆ!
ಮನೆಮಾಡಿನ ಹೊರಗೆ
ಗುಬ್ಬಚ್ಚಿ ಕಟ್ಟಿದ ಗೂಡು
ಬೆಳಕಾಗುತ್ತಲೆ ಶುರುವಾದ
ಹಕ್ಕಿಗಳ ಚಿಲಿಪಿಲಿ ಹಾಡು;
ಊರಾಚೆಯ ಬೆಟ್ಟಕಲ್ಲು ಗುಡ್ಡ ಕಾಡು
ಗಿಡ ಮರ ಕೆರೆ ಕುಂಟೆಗಳಿಗೂ
ನನಗೂ ಬೆಸೆದಿಟ್ಟ
ಆಪ್ತಥಾ ಭಾವದ ಹಾಡು,
ಸುತ್ತಲಿನ ಬದುಕಿನ ಗಡಿಯೊಳಗೇ
ಅವಿತಿರುವ ಮತ್ತೊಂದು
ಅನನ್ಯ ಬದುಕಿನ ಜಾಡು
ತೋರಿದ
ಅಪ್ಪ ಇಂದೆಲ್ಲಿ?
ಕಣ್ಣುಕ್ಕಿ ಬಂದ ಭಾವಕೆ ಕಣ್ಣು ತೆರೆದರೆ
ಎದುರಿಗೆ
ಟೈಸೂಟು ಬೂಟು ಧರಿಸಿದ
ಇಂದಿನ ಸಾಫ್ಟ್ವೇರ್ ಹಾರ್ಡ್ವೇರ್
ಅಪ್ಪಂದಿರು!
ಮಕ್ಕಳ ಮುಂದೆ
ಹಣದ ನೆಲಹಾಸು ಹಾಸಿ
ಟಿ.ವಿ, ಕಂಪ್ಯೂಟರ್ ಬೈಕುಕಾರು
ಬೇಡಿದ್ದೆಲ್ಲವನ್ನು ಬೇಡುವ
ಮುಂಚೆಯೇ ತಂದಿಟ್ಟಾರು.
ಜಗಮಗಿಸುವ ದೀಪಗಳ
ನಗರದ ಕೌತುಕ ಲೋಕವನ್ನೇ
ಅವರ ಮುಂದೆ ತೆರೆದಿಟ್ಟಾರು,
ಹಣದ ಮುಂದೆ ಜಗವೂ ದಾಸತಾನೇ?
ಆದರೆ!
ನನ್ನಪ್ಪ ಬರೀ ನೇಕಾರ
ಹಾಸಲಿಲ್ಲ ಹಣದ ಕಂತೆ
ತೋರಲಿಲ್ಲ ಕೊಳ್ಳುಬಾಕ ಸಂತೆ
ಆದರೂ ಕೊರತೆಯಾಗಲಿಲ
ಮನದರಿವಿನ ವಿಸ್ತಾರಕೆ
- ಎಲ್.ಎನ್.ವಸುಂಧರಾ ದೇವಿ
ಜಗ - ಜೀವ ಜಾಲ
Posted by
drsandy
on Friday, March 6, 2009
/
Comments: (0)

ಜಗ-ಜೀವ-ಜಾಲ
ಅರಸೊತ್ತಿಗೆ ಇದ್ದ ಕಾಲದಲಿ
ಊರೂರಿಗೊಂದೊಂದು
ಕೆರೆ ಕುಂಟೆ ಬಾವಿ;
ತಡೆಯಿಲ್ಲದೆ ಮಂಜೂರು
ಅದಕಾಗಿ ನೆಡೆದಿತ್ತು ಆ ಜನರ
ತ್ರಿವಿಧದ ದಾಸೋಹ
ಕೆರೆ ಕಟ್ಟಿ ನೀರುಣಿಸಿ
ತಾವೂ ತಣಿದ ಮಂದಿ
ಧನ್ಯರಾದರು ಅಂದಿಗೆ,
ಜನರೇ ಪ್ರಭುಗಳಾದ ಕಾಲಕ್ಕೆ
ಊರೂರಿನಲ್ಲೂ ಕೆರೆ ಕುಂಟೆ
ಮುಚ್ಚಿಸಲು, ಕಟ್ಟಡ ಕಟ್ಟಿಸಲು
ಕೋಟಿ ಕೋಟಿಗಳ ಅನುದಾನ
ನಡೆದಿವೆ ಅದಕಾಗಿ ದೈತ್ಯ ಯಂತ್ರಗಳ
ಶ್ರಮದಾನ,
ಕಟ್ಟಡ ಕಟ್ಟಿಸಿ, ಹಣ ಎಣಿಸಿಕೊಂಡ ಮಂದಿ
ಧನ್ಯರಾದರು ಇಂದಿಗೆ.
ಬೆಟ್ಟ ಗುಡ್ಡಗಳನ್ನೇ ಬಳಿದು ತಿಂದು
ಜೀರ್ಣಿಸಿಕೊಳ್ಳುವ ರಕ್ಕಸ ಸಂಸ್ಕೃತಿಯ
ಹೊಟ್ಟೆಬಾಕರು ಕಾಡು ಮೇಡುಕೊಳ್ಳಗಳನ್ನೇ
ಕೊಳ್ಳೆ ಹೊಡೆದು ಅಗಿದು ನುಂಗಿ ಬಿಡುವ
ಮಹನೀಯರು
ಮಿಲಿಯಾಂತರ ವರುಷಗಳ
ತವನಿಧಿ
ಜಲಮೂಲಗಳ ಬಗೆದು ಬರಿದು ಮಾಡಿದ
ಮಹಾಪ್ರಭುಗಳು,
ಭವಿತವ್ಯದಲಿ ಮಾಡುವರೇನು?
ಕಾಳು ಮೊಳೆಯದ ಬರಡು ಭೂಮಿಯಲಿ
ಕೊರಡು ಕೊನರದ ಒಣ ಜಾಗದಲಿ
ಸ್ಸ್ಥಾಪಿಸುವರಾವ
ಪ್ರೇತ ಸಾಮ್ರಾಜ್ಯ?
ಗ್ರಹ ತಾರೆಗಳ ಮೀಟಿ ಬಂದವ
ಮಹಾ ಮೇಧಾವಿ
ಸಾಗರ ತಳವ ಶೋಧಿಸಿದವನೊಬ್ಬ
ಪರಾಕ್ರಮಿ
ಜಗವನ್ನೆ ಉಡಾಯಿಸಬಲ್ಲ
ಜ್ಞಾನ ಪಡೆದವನೊಬ್ಬ
ವಿಜ್ಞಾನಿ- ಎಲ್ಲರೂ ಮಹನೀಯರೇ!
ಇವರಲ್ಲಾರೂ
ತುಣುಕು ಭೂಮಿಯನ್ನು ಸ್ವಂತ ರಚಿಸಲಾರರು!
ಬೆಟ್ಟ ಗುಡ್ಡಗಳನು ಮರಳಿ ಮಾಡಲಾರರು
ಪ್ರಕೃತಿಯ ಹೊರತಾಗಿ ಸೃಜಿಸಲಾರರು
ಒಂದು ಹನಿ ನೀರು
ಹನಿ ನೀರನ್ನೂ ಸೃಜಿಸಲಾರದ
ಮನುಜ, ಪ್ರಕೃತಿಯ ಮುಂದಿನ
ಸಣ್ಣಕಣ-ಹುಲುಮಾನವ!
ಮಾನವ ಬದುಕಲು ಬೇಕೇ ಬೇಕು
ಒಂದು ಜೀವಜಾಲ
ಬೆಟ್ಟಗುಡ್ಡ ಕಾಡು ಮೇಡು
ಕ್ರಿಮಿಕೀಟ ಪಶುಪಕ್ಷಿ
ಮಣ್ಣು ನದಿ-ಕೆರೆಗಳ ಮೂಲ
ಇದ ಮರೆತು ಮಲೆತು ನಡೆದವಗೆ
ಇಲ್ಲ ಉಳಿಗಾಲ;
ಇಹ ಪರಗಳೆರಡರಲ್ಲೂ ಇಲ್ಲ ಉಳಿಗಾಲ.
ಎಲ್.ಎನ್. ವಸುಂಧರಾ ದೇವಿ.
ಪಕ್ಷಿಗಳ ನೋಡಿದಿರ
Posted by
drsandy
on Saturday, January 10, 2009
/
Comments: (0)
ಪಕ್ಷಿಗಳ ನೋಡಿದಿರಾ ಈ ಪಕ್ಶಿಗಳ ನೋಡಿದಿರಾ
ಲಕ್ಷಾಂತರ ಪಕ್ಷಾಂತರ ಪಕ್ಷಿಗಳ ನೋಡಿದಿರಾ
ಬಣ್ಣ ಬಣ್ಣದ ರೆಕ್ಕೆ ಪುಕ್ಕದಿ ಹಾರುತಿದೆ ನೋಡಿದಿರಾ
ಲಕ್ಷಾಂತರ ಪಕ್ಷಾಂತರ ಪಕ್ಷಿಗಳ ನೋಡಿದಿರಾ
ಹಸ್ತಾನಾಪುರದಿ ಹಾರುವ ಪಕ್ಷಿಗಳಿವು
ತಲೆ ತಲೆಮಾರಿನ ಕಥೆಗಳ ಹೇಳಿದವು
ಇತರೆ ಪಕ್ಷಿಗಳ ತೆಗಳಿ ದೂರಿದವು
ಕೊನೆಗೊಮ್ಮೆ ಹಾರಿದವು,
ಎಲ್ಲಿಗೆ? ಇನ್ನೆಲ್ಲಿಗೆ ತೆಗಳಿದೂರಿಗೆ ಭತ್ತದಳದೂರಿಗೆ
ಭತ್ತದಳದಿ ಮೇಯಲು ತೆನೆಯೇ ಇಲ್ಲಾ
ಇರುವುದೆಲ್ಲಾ ಟೊಳ್ಳೇ ಅಲ್ಲಾ
ಇನ್ನಿಲ್ಲಿರುವುದೂ ತರವಲ್ಲ
ಮತ್ತಿನ್ನೆಲ್ಲಿಗಾದರೂ ಹೋಗಲೇ ಬೇಕಲ್ಲಾ
ಹೋಗಲು ಅಡ್ಡಿಏನಿಲ್ಲಾ
ಹಾರಿದವು ಪಕ್ಶಿಗಳು ತಾವರೇಕೆರೆಗೆ
ತಾವರೇಕೆರೆಯ ಕಾಂಚಣ ಕರೆಗೆ
ಎಲ್ಲಿಯ ಕಾಂಚಾಣ ಎಲ್ಲಿಯ ತಾವರೆ
ಇರುವುದೆಲ್ಲಾ ಮಣ್ಣೂ ಕೆಸರೇ
ಆದರೇನಂತೆ ನಮ್ಮ ಪಕ್ಶಿಗಳಿಗಿವೆ ರೆಕ್ಕೆ ಪುಕ್ಕಗಳ ಆಸರೆ
ಲಕ್ಷಾಂತರ ಪಕ್ಷಾಂತರ ಪಕ್ಷಿಗಳ ನೋಡಿದಿರಾ
ಬಣ್ಣ ಬಣ್ಣದ ರೆಕ್ಕೆ ಪುಕ್ಕದಿ ಹಾರುತಿದೆ ನೋಡಿದಿರಾ
ಲಕ್ಷಾಂತರ ಪಕ್ಷಾಂತರ ಪಕ್ಷಿಗಳ ನೋಡಿದಿರಾ
ಹಸ್ತಾನಾಪುರದಿ ಹಾರುವ ಪಕ್ಷಿಗಳಿವು
ತಲೆ ತಲೆಮಾರಿನ ಕಥೆಗಳ ಹೇಳಿದವು
ಇತರೆ ಪಕ್ಷಿಗಳ ತೆಗಳಿ ದೂರಿದವು
ಕೊನೆಗೊಮ್ಮೆ ಹಾರಿದವು,
ಎಲ್ಲಿಗೆ? ಇನ್ನೆಲ್ಲಿಗೆ ತೆಗಳಿದೂರಿಗೆ ಭತ್ತದಳದೂರಿಗೆ
ಭತ್ತದಳದಿ ಮೇಯಲು ತೆನೆಯೇ ಇಲ್ಲಾ
ಇರುವುದೆಲ್ಲಾ ಟೊಳ್ಳೇ ಅಲ್ಲಾ
ಇನ್ನಿಲ್ಲಿರುವುದೂ ತರವಲ್ಲ
ಮತ್ತಿನ್ನೆಲ್ಲಿಗಾದರೂ ಹೋಗಲೇ ಬೇಕಲ್ಲಾ
ಹೋಗಲು ಅಡ್ಡಿಏನಿಲ್ಲಾ
ಹಾರಿದವು ಪಕ್ಶಿಗಳು ತಾವರೇಕೆರೆಗೆ
ತಾವರೇಕೆರೆಯ ಕಾಂಚಣ ಕರೆಗೆ
ಎಲ್ಲಿಯ ಕಾಂಚಾಣ ಎಲ್ಲಿಯ ತಾವರೆ
ಇರುವುದೆಲ್ಲಾ ಮಣ್ಣೂ ಕೆಸರೇ
ಆದರೇನಂತೆ ನಮ್ಮ ಪಕ್ಶಿಗಳಿಗಿವೆ ರೆಕ್ಕೆ ಪುಕ್ಕಗಳ ಆಸರೆ